ಮೇಳ: ಹೊಸನಗರ
ದಿನಾಂಕ: ೨೬ ಮೇ ೨೦೦೮
ಸ್ಥಲ: ಕಾರಿಂಜ ಆಂಜನೇಯ ದೇವಸ್ಥಾನ, ಬೆಂಗಳೂರು
ಬಹುಶ: ಇಂದಿನ ದಿನಗಳಲ್ಲಿ ಕಮರ್ಶಿಯಲ್ ಪ್ರದರ್ಶನಗಳಲ್ಲಿ ಕಾಣಸಿಗದ ಅಪರೂಪದ ಪ್ರಸಂಗ ಕುಂಭಕರ್ಣ ಕಾಳಗ. ಬಣ್ಣದ ವೇಶದ ಮೂಲಕ ಮತ್ತೆ ತೆಂಕು ತಿಟ್ಟಿನ ಸುವರ್ಣ ಯುಗವನ್ನು ನೆನಪಿಗೆ ತರುತ್ತಿರುವ ಸದಾಶಿವ ಶೆಟ್ಟಿಗಾರರ ಕುಂಭಕರ್ಣ ಈ ಪ್ರಸಂಗದ ಪ್ರಮುಖ ಆಕರ್ಶಣೆ. ದೊಂದಿಯೊಂದಿಗೆ ಸಭೆಯ ಮಧ್ಯೆ ನಡೆದಾಡುವುದು ಶೆಟ್ಟಿಗಾರರ ವಿಶೇಷತೆ. ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸುವ ಸನ್ನಿವೇಷ, ನಿದ್ದೆಯಿಂದ ಎಚ್ಚೆತ್ತ ಕುಂಭಕರ್ಣನ ಅಟ್ಟಹಾಸ, ರಾವಣ ಕುಂಭಕರ್ಣರ ಸಂವಾದ ಯಕ್ಷರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಭಾಗವತ ಪದ್ಯಾಣ ಗಣಪತಿ ಭಟ್ಟರು ಈ ಪ್ರಸಂಗದುದ್ದಕ್ಕೂ ಬಲಿಪ ಭಾಗವತರ ಶೈಲಿಯಲ್ಲಿ ಹಾಡಿ ಪ್ರಸಂಗದ ಯಶಸ್ಸಿಗೆ ಕಾರಣರಾದರು. ಅದರಲ್ಲೂ "ತಮ್ಮ ಕೇಳೆನಗೂಂದು ತೊಡರು ಬಂದೊದಗಿತು" ಹಾಡು ಅದ್ಭುತವಾಗಿ ಮೂಡಿ ಬಂತು. ಪದ್ಯಾಣರ ಹಾಡುಗಳು ಕೇಳುಗನಿಗೆ ಸ್ಪಷ್ಟವಾದರೆ ಅವರ ಭಾಗವತಿಕೆಗೆ ಇನ್ನಷ್ಟು ರಂಗು ಬಂದೀತು.
ತೆಂಕಿನ ಹಿಮ್ಮೇಳ ಕಲಾವಿದರಲ್ಲಿ ಶಿಸ್ತು ಇಲ್ಲ ಎಂಬ ಮಾತನ್ನು ಸಮರ್ಥಿಸಲೋಸುಗವೊ ಎಂಬಂತೆ ಹಿಮ್ಮೇಳದ ಎಲ್ಲ ಕಲಾವಿದರು ಕೂಡಾ ಮುಂಡಾಸು ಧರಿಸದೆ ಪ್ರದರ್ಶನ ನೀಡಿದ್ದು ವಿಷಾದನೀಯ.
ರಾಮ ಲಕ್ಶ್ಮಣರ ವೇಷಗಾರಿಕೆಯ ಕುರಿತು ಚಿಂತಿಸುವ ಅಗತ್ಯವಿದೆ. ಮೈಬಿಟ್ಟು ಮಾಡಿದ ಈ ವೇಶಗಳು ನಾಟಕದ ವೇಶಗಳಂತೆ ಕಂಡು ಬಂದವು.
ಬೆಂಗಳೂರಿನಲ್ಲೂ ಕೂಡ, ಈ ಯಕ್ಷಗಾನಕ್ಕಾಗಿ ಪ್ರತ್ಯೇಕ ರಂಗಸ್ಥಳ ನಿರ್ಮಿಸಿದ ಸಂಘಟಕರ ಅಭಿರುಚಿಯನ್ನು ಹೊಗಳಲೇಬೇಕು.
Subscribe to:
Post Comments (Atom)
1 comment:
"ಭಾಗವತ ಪದ್ಯಾಣ ಗಣಪತಿ ಭಟ್ಟರು ಈ ಪ್ರಸಂಗದುದ್ದಕ್ಕೂ ಬಲಿಪ ಭಾಗವತರ ಶೈಲಿಯಲ್ಲಿ ಹಾಡಿ ಪ್ರಸಂಗದ ಯಶಸ್ಸಿಗೆ ಕಾರಣರಾದರು"
andare balipara shyli atada yashassige karanave horatu padyanara "swantikeyindalla" allave??
Post a Comment