ರವೀಂದ್ರ ಕಲಾಕ್ಶೇತ್ರದಲ್ಲಿ ಇರುವೆಯೂ ಕಾಲಿಡಲಾರದಶ್ಟು ಜನಸಾಗರ. ತಡವಾಗಿ ಬಂದವರಿಗೆ ನಿಂತು ನೋಡುವುದಕ್ಕೂ ಅವಕಾಶವಿಲ್ಲ. ಚಿಟ್ಟಾಣಿ ರಂಗಪ್ರವೇಶದ ಅರವತ್ತನೇ ವರುಶದ ಸಂಭ್ರಮ, ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು. ಬಹುಶ: ಯಕ್ಶಗಾನ ಕಾಲಾವಿದರಲ್ಲಿ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಪಡೆದ, ಯಕ್ಶಗಾನಕ್ಕೆ ಅತ್ಯಂತ ಹೆಚ್ಚಿನ ಜನರನ್ನು ಸೆಳೆದ ಕಲಾವಿದ ಚಿಟ್ಟಾಣಿ.
ಇಂಥಹ ಅಪೂರ್ವ ಕಾರ್ಯಕ್ರಮದಂದು ಚಿಟ್ಟಾಣಿಯವರ ಸಂಧಾನದ ಕೃಶ್ಣ ಪಾತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೋ ಎಂಬ ಅಳುಕು ಕಲಾಭಿಮಾನಿಗಳಿಗಿತ್ತು. ಇಂಥಹ ಸಂದರ್ಭಗಲಲ್ಲಿ ಕಲಾವಿದ ಅದ್ಭುತ ಪ್ರದರ್ಶನ ನೀಡುವುದೂ ಉಂಟು. ದುರದೃಶ್ಟವಶಾತ್ ಅಂದು ಪ್ರದರ್ಶನ ವಿಫಲವಾಯ್ತು. ಚಿಟ್ಟಾಣಿಯವರೂ ಮಿಂಚಲಿಲ್ಲ. ಶಶಿಕಾಂತ ಶೆಟ್ಟಿಯವರ ದ್ರೌಪದಿಯ ಪಾತ್ರ ಮಾತ್ರ ಯಶಸ್ವಿಯಾಯ್ತು. ಆರಂಭದ ಕೃಶ್ಣನಾಗಿ ಕಾಣಿಸಿಕೊಂಡ ಕಣ್ಣಿ ಕೃಷ್ಣನ ಪ್ರವೇಶದಲ್ಲೇ ನಿರಾಸೆ ಮೂಡಿಸಿದರು. ಯಾಜಿಯವರ ಕೌರವ 'ಕಡಿಮೆಯಲ್ಲ, ಹೆಚ್ಚಲ್ಲ'. ಬಹುಶ: ಅದೇ ಯಾಜಿಯವರ ವಿಶೇಷತೆ!. ಚಂದ್ರಹಾಸ ಹುಡುಗೋಡರ ಭೀಮ 'ಭೀಮಾಸುರ' ನಂತೆ ತೋರಿ ಬಂತು.
ಕೊಳಗಿಯವರ ಭಾಗವತಿಕೆಯ ಬಗ್ಗೆ ಎರಡು ಮಾತು. ಸಂಧಾನ ಪ್ರಸಂಗ ಎಂಥಹ ಭಾಗವತನಿಗೂ ಸವಾಲೆ. ಕೊಳಗಿಯವರ ಧ್ವನಿ ಶ್ರುತಿಗೂಡಲೂ ಇಲ್ಲ, ಪ್ರೇಕ್ಶಕರನ್ನು ತಟ್ಟಲೂ ಇಲ್ಲ. ಇನ್ನು ಚಿಟ್ಟಾಣಿಯವರ ಪಾತ್ರವನ್ನು 'ಉಟ್ಟಾವ್' ಮಾಡಲೂ ಇಲ್ಲ. ಭೀಮ ದ್ರೌಪದಿ ಸನ್ನಿವೇಶ ಎಂದೂ ಮುಗಿಯದ ಕನ್ನಡ ದೂರದರ್ಶನ ಧಾರವಾಹಿಯನ್ನು ನೆನಪಿಸಿತು. ಭಾಗವತನ ಸ್ಥಾನ ತೆರೆಮರೆಗೆ ಸರಿಯುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಭರವಸೆ ಮೂದಿಸಿರುವ ರಾಘವೆಂದ್ರ ಆಚಾರಿಯವರಂಥಹ ಯುವ ಭಾಗವತರಿಗೆ ಅವಕಾಶ ಮಾಡಿ ಕೊಡುವುದರ ಬಗ್ಗೆ ಸಂಘಟಕರು ಯೋಚಿಸಬೇಕಿದೆ.
ಚಿಟ್ಟಾಣಿಯವರಿಗೆ ಅರುವತ್ತರ ರಂಗಸಂಭ್ರಮದ 'ಸವಿ'ಸಮಯದಲ್ಲಿ ಶುಭಾಶಯಗಳು.
Tuesday, September 15, 2009
Subscribe to:
Comments (Atom)