ವಾಲಿ ರಾವಣರ ಯುದ್ಧದ ಸನ್ನಿವೇಶ ಯಕ್ಶಗಾನದಲ್ಲಿ ಅಪರೂಪ. ಲಂಕಾದಹನ ಪ್ರಸಂಗದಲ್ಲಿ ಸೀತೆ ಸರಮೆಗೆ ಹೇಳುತ್ತಾಳೆ - ’ ಬಲ್ಲಿದನಾದರೆ ಶಿವನ ಬಿಲ್ಲನೆತ್ತದೇಕೆ ಪೋದ, ಕಲ್ಲೆದೆಯಾದರೆ ತೊಟ್ಟಿಲಲಿ ಕಟ್ಟಿಸಿಕೊಂಬನೆ’- ವಾಲಿ ರಾವಣನನ್ನು ಅಂಗದನ ತೊಟ್ಟಿಲಿಗೆ ಕಟ್ಟಿ ತೂಗಿಸಿದ ಸನ್ನಿವೇಶ ಯಕ್ಷಗಾನದಲ್ಲಿ ಅಪರೂಪ.
ಸಾಲಿಗ್ರಾಮ ಮೇಳ ಕಾಳಿಂಗ ನಾವಡರ ನಿರ್ದೆಶನದಲ್ಲಿ ಸಮಗ್ರ ರಾವಣ ಪ್ರದರ್ಶನ ನೀಡುತ್ತಿದ್ದಾಗ ಈ ಅಪರೂಪದ ಸನ್ನಿವೇಶವನ್ನು ಬಳಸಿಕೊಳ್ಳುತ್ತಿದ್ದರು. ನಾನು ನೋಡಿದ ೧೯೮೭ರ ಒಂದು ಪ್ರದರ್ಶನದಲ್ಲಿ ಬಿಳಿಯೂರು ಕ್ರಿಶ್ಣಮೂರ್ತಿಯವರು ವಾಲಿಯಾಗಿಯೂ, ಜಲವಳ್ಳಿಯವರು ರಾವಣನಾಗಿಯೂ ಅಭಿನಯಿಸಿದ್ದರು.
ಇಲ್ಲಿ ನಾನು ಅಗತ್ಯವಾಗಿ ಹಂಚಿಕೊಳ್ಳಬೇಕಾದ್ದೆಂದರೆ ನಾವಡರ ಕೆಲವು ಅಪರೂಪದ ಹಾಡುಗಳು. ಈ ಮಟ್ಟಿನ ಹಾಡು ನನಗೆ ತಿಳಿದಂತೆ ನಾವಡರ ಅಮ್ರುತಮತಿ ಕ್ಯಾಸೆಟ್ಟಿನಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಂಡಿದೆ. ಮಗ ಅಂಗದನನ್ನು ವಾಲಿ ಮುದ್ದಿಸುವ, ರಾವಣ ನಾಚಿ ತಲೆತಗ್ಗಿಸುವ ಸನ್ನಿವೇಶಗಳ ಅಪರೂಪದ ಹಾಡುಗಳನ್ನು ಕೇಳಿ.
ಇಂಥಹ ಅಪರೂಪದ ನಾವಡ ಸ್ಟೈಲ್ ಒಂದೇ ಎರಡೇ! ಅದ್ದರಿಂದಲೇ ಆತ ನಿಜ ಅರ್ಥದಲ್ಲಿ ಯಕ್ಶಗಾನ ಭಾಗವತಿಕೆಯ ಯುಗ ಪ್ರವರ್ತಕ! ನೆಬ್ಬೂರರ ಬಗ್ಗೆ, ಕಡತೋಕರ ಬಗ್ಗೆ, ಯಾಜಿ ಭಾಗವತ ಬಗ್ಗೆ ಪುಸ್ತಕಗಳು ಬಂದಿವೆ. ಭಾಗವತಿಕೆಯ ಯುಗ ಪ್ರವರ್ತಕನ ಜೀವನ, ಸಾಧನೆಗಳ ಪುಸ್ತಕ ಬರದಿರುವುದು ಆಶ್ಚರ್ಯವೂ ಹೌದು, ಕಲಾಪ್ರೇಮಿಗಳು ತಲೆತಗ್ಗಿಸಬೇಕಾದ ವಿಷಯವೂ ಹೌದು.
Subscribe to:
Post Comments (Atom)
No comments:
Post a Comment